By using this site, you agree to the Privacy Policy and Terms of Use.
Accept
Sky kannadaSky kannadaSky kannada
Notification Show More
Font ResizerAa
  • Home
  • ಲೈಫ್ ಸ್ಟೈಲ್
  • ಉದ್ಯೋಗ
  • ಮನರಂಜನೆ
  • ಸಾಧಕರ ಕತೆ
  • ಜ್ಯೋತಿಷ್ಯ
  • Others
  • Trending
Reading: ಎಲ್ಲಾ ನಟರು ಈ ಪಾತ್ರವನ್ನು ತಿರಸ್ಕರಿಸಿದರು…ಆದರೆ ಸಲ್ಲೂ ಭಾಯ್‌ ಕೇವಲ 1 ರೂ.ಗೆ ಆ  ಚಿತ್ರದಲ್ಲಿ ನಟಿಸಿದರು, ಯಾಕೆ ಗೊತ್ತಾ?   
Share
Sky kannadaSky kannada
Font ResizerAa
  • Home
  • ಲೈಫ್ ಸ್ಟೈಲ್
  • ಉದ್ಯೋಗ
  • ಮನರಂಜನೆ
  • ಸಾಧಕರ ಕತೆ
  • ಜ್ಯೋತಿಷ್ಯ
  • Others
  • Trending
Search
  • Home
  • ಲೈಫ್ ಸ್ಟೈಲ್
  • ಉದ್ಯೋಗ
  • ಮನರಂಜನೆ
  • ಸಾಧಕರ ಕತೆ
  • ಜ್ಯೋತಿಷ್ಯ
  • Others
  • Trending
Have an existing account? Sign In
Follow US
  • Advertise
© 2022 Foxiz News Network. Ruby Design Company. All Rights Reserved.

Sky Kannada | Home | ಎಲ್ಲಾ ನಟರು ಈ ಪಾತ್ರವನ್ನು ತಿರಸ್ಕರಿಸಿದರು…ಆದರೆ ಸಲ್ಲೂ ಭಾಯ್‌ ಕೇವಲ 1 ರೂ.ಗೆ ಆ  ಚಿತ್ರದಲ್ಲಿ ನಟಿಸಿದರು, ಯಾಕೆ ಗೊತ್ತಾ?   

Homeಮನರಂಜನೆ

ಎಲ್ಲಾ ನಟರು ಈ ಪಾತ್ರವನ್ನು ತಿರಸ್ಕರಿಸಿದರು…ಆದರೆ ಸಲ್ಲೂ ಭಾಯ್‌ ಕೇವಲ 1 ರೂ.ಗೆ ಆ  ಚಿತ್ರದಲ್ಲಿ ನಟಿಸಿದರು, ಯಾಕೆ ಗೊತ್ತಾ?   

Sky Kannada News
Last updated: October 7, 2024 4:29 am
By Sky Kannada News
8 months ago
Share
2 Min Read
SHARE

Salman Khan Took One Rupee: ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಬಗ್ಗೆ ಹೆಚ್ಚೇನು ಹೇಳಬೇಕಿಲ್ಲ. ಸಲ್ಮಾನ್ ತಮ್ಮ ವೃತ್ತಿ ಜೀವನದಲ್ಲಿ ಅನೇಕ ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಸಲ್ಮಾನ್ ರೀಲ್‌ ಲೈಫ್‌ನಲ್ಲಿ ಎಷ್ಟು ಒಳ್ಳೆಯ ನಟನೋ ರಿಯಲ್‌ ಲೈಫ್‌ನಲ್ಲಿ ಅಷ್ಟೇ ಹೃದಯವಂತ. ಈ ಬಗ್ಗೆ ಅನೇಕ ಕಡೆ ನೋಡಿದ್ದೇವೆ, ಕೇಳಿದ್ದೇವೆ. ಆದರೆ ಭಾಯಿಜಾನ್ ಕೇವಲ 1 ರೂಪಾಯಿಗೆ ಸಿನಿಮಾವೊಂದರಲ್ಲಿ ನಟಿಸಿರುವ ಬಗ್ಗೆ ನಿಮಗೆ ಗೊತ್ತಾ?. ಹೌದು, 2004ರಲ್ಲಿ ತೆರೆಕಂಡ ‘ಫಿರ್ ಮಿಲೇಂಗೆ’ ಚಿತ್ರಕ್ಕೆ ಸಲ್ಮಾನ್ ಖಾನ್ ಕೇವಲ 1 ರೂ.ಸಂಭಾವನೆ ಪಡೆದಿದ್ದರು. ಸಲ್ಮಾನ್ ಖಾನ್ ಈ ಸಿನಿಮಾ ಏಕೆ ಆರಿಸಿಕೊಂಡರು?, ಅವರು ಕೇವಲ ಒಂದು ರೂಪಾಯಿ ಏಕೆ ತೆಗೆದುಕೊಂಡರು? ಎಂಬುದರ ಕುರಿತು ಪೂರ್ತಿ ವಿವರ ಇಲ್ಲಿದೆ ನೋಡಿ…

ನಿರ್ಮಾಪಕರು ಹೇಳಿದ್ದೇನು?

ಹಿಂದಿ ಚಿತ್ರರಂಗದ ಖ್ಯಾತ ನಿರ್ಮಾಪಕ ಶೈಲೇಂದ್ರ ಸಿಂಗ್ ಇನ್ಸ್ಟಾಗ್ರಾಮ್‌ನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಅದರಲ್ಲಿ ‘ಫಿರ್ ಮಿಲೇಂಗೆ’ ಸಿನಿಮಾ ಕುರಿತು ಹೇಳಿದ್ದಾರೆ. ನಿರ್ಮಾಪಕರು ಹೇಳಿರುವ ಪ್ರಕಾರ, “ಸಲ್ಮಾನ್ ಖಾನ್ ಚಿತ್ರಕ್ಕೆ 1 ರೂ.ಸಂಭಾವನೆ ತೆಗೆದುಕೊಂಡರು. ಅವರು ಬಾಲಿವುಡ್‌ನ ಯೂತ್ ಐಕಾನ್. ಆದರೆ ಇಂತಹ ಚಿತ್ರದಲ್ಲಿ ಹೇಗೆ ನಟಿಸಿದರು ಎಂದು ನೀವೇ ಊಹಿಸಿ. ಅಷ್ಟೇ ಅಲ್ಲ, ಸಿನಿಮಾದಲ್ಲಿ ನಟನಿಗೆ HIV ಪಾಸಿಟಿವ್ ಆಗಿ ಕೊನೆಯಲ್ಲಿ ಸಾಯುತ್ತಾನೆ. ಇದೇ ಕಾರಣಕ್ಕೆ ಅನೇಕ ನಟರು ಫಿರ್ ಮಿಲೇಂಗೆ ಚಿತ್ರ ಮಾಡಲು ನಿರಾಕರಿಸಿದ್ದರು. ಆದ್ರೆ ಸಲ್ಮಾನ್ ಖಾನ್ ಒಪ್ಪಿಕೊಂಡರು.

Also Read: ಅಭಿಮಾನಿ ಸಾವನ್ನಪ್ಪಿದಾಗ ಅವರ ಕುಟುಂಬವನ್ನೇ ದತ್ತು ತೆಗೆದುಕೊಂಡರು ಈ ಸೌತ್ ಸ್ಟಾರ್…ಆ ನಟ ಯಾರು ಬಲ್ಲೀರಾ?    

ಇಂಡಸ್ಟ್ರಿಯ ಬಹುತೇಕ ಎಲ್ಲಾ ಹೀರೋಗಳು ಎಚ್‌ಐವಿ ಪಾಸಿಟಿವ್ ವ್ಯಕ್ತಿಯ ಪಾತ್ರದಲ್ಲಿ ನಟಿಸಲು ನಿರಾಕರಿಸಿದರು. ಆದರೆ ಸಲ್ಮಾನ್ ಖಾನ್ ಮಾತ್ರ ಈ ಪಾತ್ರ ಒಪ್ಪಿಕೊಂಡರು. ಇದು ಅವರ ಅತಿಥಿ ಪಾತ್ರ. ಇದು ಅವರ ಸ್ಟಾರ್‌ಡಮ್‌ನ ಮೇಲೆ ಪರಿಣಾಮ ಬೀರಬಹುದು ಎಂದು ಅವರಿಗೆ ತಿಳಿದಿತ್ತು. ಆದರೂ ಸಲ್ಮಾನ್ ಖಾನ್ ರಿಸ್ಕ್ ತೆಗೆದುಕೊಂಡರು. ನಿಸ್ಸಂಶಯವಾಗಿ ಅವರ ಪಾತ್ರವು ಅಭಿಮಾನಿಗಳಿಗೆ ಇಷ್ಟವಾಗಲಿಲ್ಲ. ಆದರೆ ನಾವು ಜನರಿಗೆ ತಿಳಿಸಲು ಬಯಸಿದ ಸಂದೇಶವನ್ನು ಈ ಚಿತ್ರದ ಮೂಲಕ ತಲುಪಿಸಲು ಸಾಧ್ಯವಾಯಿತು” ಎಂದು ತಿಳಿಸಿದ್ದಾರೆ.

ನಿರ್ಮಾಪಕ ಶೈಲೇಂದ್ರ ಸಿಂಗ್ ಮಾತನಾಡಿರುವ ವಿಡಿಯೋ ವೀಕ್ಷಿಸಲು ಈ ಲಿಂಕ್‌ ಕ್ಲಿಕ್‌ ಮಾಡಿ

ಹಾಲಿವುಡ್‌ನಿಂದ ಪ್ರೇರಿತವಾದ ಚಿತ್ರ

‘ಫಿರ್ ಮಿಲೇಂಗೆ’ ಚಿತ್ರದಲ್ಲಿ ಶಿಲ್ಪಾ ಶೆಟ್ಟಿ ಮತ್ತು ಅಭಿಷೇಕ್ ಬಚ್ಚನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರವನ್ನು ರೇವತಿ ನಿರ್ದೇಶಿಸಿದ್ದರು. ಮಾಧ್ಯಮ ವರದಿಗಳ ಪ್ರಕಾರ, ಏಡ್ಸ್ ಮತ್ತು ಎಚ್‌ಐವಿ ಕುರಿತು ಜಾಗೃತಿ ಮತ್ತು ಸಂದೇಶವನ್ನು ತಲುಪಿಸುವ ಉದ್ದೇಶದಿಂದ ನಿರ್ಮಿಸಲಾದ ‘ಫಿರ್ ಮಿಲೇಂಗೆ’ ಚಲನಚಿತ್ರವು ಹಾಲಿವುಡ್ ಚಲನಚಿತ್ರ ಫಿಲಡೆಲ್ಫಿಯಾದಿಂದ ಪ್ರೇರಿತವಾಗಿದೆ.

ಸಲ್ಮಾನ್ಗೆ  ರಶ್ಮಿಕಾ ನಾಯಕಿ

ಪ್ರಸ್ತುತ ಸಲ್ಮಾನ್ ಸಾಜಿದ್ ನಾಡಿಯಾಡ್ವಾಲಾ ಅವರ ‘ಸಿಕಂದರ್’ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ‘ಸಿಕಂದರ್’ ಚಿತ್ರೀಕರಣ ಆರಂಭವಾಗಿದೆ. ಚಿತ್ರದಲ್ಲಿ ಸಲ್ಮಾನ್ ಖಾನ್ ಎದುರು ರಶ್ಮಿಕಾ ಮಂದಣ್ಣ ಕಾಣಿಸಿಕೊಳ್ಳಲಿದ್ದಾರೆ.

 

You Might Also Like

ಸ್ವರ್ಗಕ್ಕೆ ಮೆಟ್ಟಿಲುಗಳು ಭೂಮಿಯ ಮೇಲೆ ಎಲ್ಲಿದೆ?, ಇಲ್ಲಿದೆ ಸ್ವರ್ಗಾರೋಹಿಣಿಯ ರಹಸ್ಯ!   

Hair Care: ಕೂದಲನ್ನು ವಾರದಲ್ಲಿ ಎಷ್ಟು ಬಾರಿ ತೊಳೆಯಬೇಕು… ಬಹಳ ಬೇಗ ಬೆಳ್ಳಗಾಗುವುದಕ್ಕೆ ಕಾರಣವೇನು ಗೊತ್ತೇ?

Deepavali 2024: ದೀಪಾವಳಿಯ ರಾತ್ರಿ ಈ ಕನಸುಗಳನ್ನು ಕಂಡರೆ ಶುಭ ಸಂಕೇತ…ನಿಮ್ಮ ಮನೆಯಲ್ಲಿ ಹಣದ ಮಳೆಯಾಗಲಿದೆ

ಭಾರತದ ಈ ಸ್ಥಳಗಳಲ್ಲಿ ಆಹಾರ, ವಸತಿಗೆ ದುಡ್ಡು ಕೊಡಬೇಕಿಲ್ಲ…ಸಂಪೂರ್ಣ ಉಚಿತ!

“ರೀಲ್ಸ್‌ನಿಂದ ಉಳಿಯಿತು ವೃದ್ಧನ ಪ್ರಾಣ”: ವಿಡಿಯೋ ಭಾರೀ ವೈರಲ್‌  

TAGGED:EntertainmentMovieSalman khanSkyKanndaಮನರಂಜನೆಸಲ್ಮಾನ್‌ ಖಾನ್‌ಸ್ಕೈ ಕನ್ನಡ
Share This Article
Facebook Email Print
Share
Previous Article ಈ ದೇವಾಲಯದಲ್ಲಿ ದೇವರನ್ನು ಪೂಜಿಸುವುದಿಲ್ಲ, ವಿಗ್ರಹಗಳೂ ಇಲ್ಲ, ಆದರೂ ನಿಮ್ಮ ಇಷ್ಟಾರ್ಥಗಳು ಈಡೇರುತ್ತವೆ..ಹೇಗೆ ಗೊತ್ತಾ?
Next Article Packaged Food ನಿಜಕ್ಕೂ ಒಳ್ಳೆಯದೇ…? ಅಸಲಿ ಸಂಗತಿ ಇಲ್ಲಿದೆ
Leave a Comment

Leave a Reply Cancel reply

Your email address will not be published. Required fields are marked *

You Might Also Like

” Expiry Date ಮುಗಿದಿದೆ ಎಂದರೆ ಉತ್ಪನ್ನವು ಕೆಟ್ಟುಹೋಗಿದೆ ಎಂದಲ್ಲ…ಮತ್ತೇ?; ಸಂಪೂರ್ಣ ಮಾಹಿತಿ ಹಂಚಿಕೊಂಡ Gazal Babel Kothari

Sun transit in Scorpio 2024: ನವೆಂಬರ್ 16 ರಿಂದ ಈ 5 ರಾಶಿಗಳಿಗೆ ಅದೃಷ್ಟವೋ ಅದೃಷ್ಟ…ವರ್ಷ ಕಳೆದಂತೆ ಬರಲಿದೆ ಹಣ

Baba Vanga Predictions: 2025 ರಲ್ಲಿ ಬದಲಾಗುತ್ತದೆ ಈ 4 ರಾಶಿಗಳ ಜನರ ಅದೃಷ್ಟ!

ಆತ್ಮೀಯ ಸ್ನೇಹಿತೆಯ ಸಂಗೀತ ಸಮಾರಂಭದಲ್ಲಿ ರಾಧಿಕಾ ಮರ್ಚೆಂಟ್ ಸಖತ್ ಸ್ಟೆಪ್ಸ್… ನೆಟ್ಟಿಗರಿಂದ ಶ್ಲಾಘನೆ.!

ಕರ್ಪೂರವಿದ್ದರೆ ಹಣದ ಕೊರತೆ ಇರಲ್ಲ; ವಿಶೇಷ, ಅಗ್ಗವಾದ, ಬಹಳ ಸುಲಭವಾದ ಈ ವಿಧಾನ ಅನುಸರಿಸಿ…

Follow US
© 2025 Sky Kannada. Newbie Techy Design Company. All Rights Reserved.
Welcome Back!

Sign in to your account

Username or Email Address
Password

Lost your password?