By using this site, you agree to the Privacy Policy and Terms of Use.
Accept
Sky kannadaSky kannadaSky kannada
Notification Show More
Font ResizerAa
  • Home
  • ಲೈಫ್ ಸ್ಟೈಲ್
  • ಉದ್ಯೋಗ
  • ಮನರಂಜನೆ
  • ಸಾಧಕರ ಕತೆ
  • ಜ್ಯೋತಿಷ್ಯ
  • Others
  • Trending
Reading: ತಿಂಗಳಿಗೆ 80 ರೂ.ಪಡೆಯುತ್ತಿದ್ದವರು ಇಂದು ಕೋಟ್ಯಾಧಿಪತಿ…ಸತತವಾಗಿ ಸೋಲನ್ನೇ ಕಂಡಿದ್ದ ವ್ಯಕ್ತಿಯ ಲೈಫ್ ಚೇಂಜ್‌ ಆದದ್ದು ಹೀಗೆ!  
Share
Sky kannadaSky kannada
Font ResizerAa
  • Home
  • ಲೈಫ್ ಸ್ಟೈಲ್
  • ಉದ್ಯೋಗ
  • ಮನರಂಜನೆ
  • ಸಾಧಕರ ಕತೆ
  • ಜ್ಯೋತಿಷ್ಯ
  • Others
  • Trending
Search
  • Home
  • ಲೈಫ್ ಸ್ಟೈಲ್
  • ಉದ್ಯೋಗ
  • ಮನರಂಜನೆ
  • ಸಾಧಕರ ಕತೆ
  • ಜ್ಯೋತಿಷ್ಯ
  • Others
  • Trending
Have an existing account? Sign In
Follow US
  • Advertise
© 2022 Foxiz News Network. Ruby Design Company. All Rights Reserved.

Sky Kannada | Home | ತಿಂಗಳಿಗೆ 80 ರೂ.ಪಡೆಯುತ್ತಿದ್ದವರು ಇಂದು ಕೋಟ್ಯಾಧಿಪತಿ…ಸತತವಾಗಿ ಸೋಲನ್ನೇ ಕಂಡಿದ್ದ ವ್ಯಕ್ತಿಯ ಲೈಫ್ ಚೇಂಜ್‌ ಆದದ್ದು ಹೀಗೆ!  

Homeಸಾಧಕರ ಕತೆ

ತಿಂಗಳಿಗೆ 80 ರೂ.ಪಡೆಯುತ್ತಿದ್ದವರು ಇಂದು ಕೋಟ್ಯಾಧಿಪತಿ…ಸತತವಾಗಿ ಸೋಲನ್ನೇ ಕಂಡಿದ್ದ ವ್ಯಕ್ತಿಯ ಲೈಫ್ ಚೇಂಜ್‌ ಆದದ್ದು ಹೀಗೆ!  

Sky Kannada News
Last updated: September 18, 2024 1:02 pm
By Sky Kannada News
9 months ago
Share
2 Min Read
SHARE

ಗುಜರಾತಿನ ಪುಟ್ಟ ಹಳ್ಳಿಯೊಂದರಲ್ಲಿ ಜನಿಸಿದ ರಮೇಶ್ ರೂಪರೇಲಿಯಾ ಅವರ ಜೀವನ ಖಂಡಿತ ಎಲ್ಲರಿಗೂ ಸ್ಫೂರ್ತಿದಾಯಕವಾಗಿದೆ. ಏಕೆಂದರೆ ರಮೇಶ್ ಅವರು ತಮ್ಮ ಬಾಲ್ಯದಿಂದಲೂ ಕಷ್ಟಗಳೊಂದಿಗೆ ಹೋರಾಡಿದರು. ಆದರೆ ಅವರ ಇಚ್ಛಾಶಕ್ತಿ ಅವರು ಊಹಿಸದ ಎತ್ತರಕ್ಕೆ ಕೊಂಡೊಯ್ದಿತು. ಹಸುಗಳನ್ನು ಮೇಯಿಸಲು ತಿಂಗಳಿಗೆ 80 ರೂಪಾಯಿ ಪಡೆಯುತ್ತಿದ್ದ ರಮೇಶ್‌ ಇಂದು ಹೈನುಗಾರಿಕೆಯಿಂದ ವಾರ್ಷಿಕ ಕೋಟಿಗಟ್ಟಲೆ ಆದಾಯ ಗಳಿಸುತ್ತಿದ್ದಾರೆ.  ‌

ರಮೇಶ್ ಅವರು ಓದಿದ್ದು ಏಳನೇ ತರಗತಿಯವರೆಗೆ ಮಾತ್ರ. ಮೊದಮೊದಲಿಗೆ ಗೋಶಾಲೆ ಆರಂಭಿಸಿದ್ದರು. ಆದರೆ ಅವರ ಈ ನಿರ್ಧಾರ ಆರ್ಥಿಕ ಬಿಕ್ಕಟ್ಟಿಗೆ ಕಾರಣವಾಯಿತು. ಕುಟುಂಬವು ಸಾಲದ ಹೊರೆಗೆ ಸಿಲುಕಿತು. ನಂತರ ಸಾಲ ತೀರಿಸಲು ತನ್ನ ಜಮೀನು ಮಾರಿ ಗೊಂಡಾಲ್ ನಗರಕ್ಕೆ ಬಂದ ಇವರಿಗೆ ಹಸು ಮೇಯಿಸುವ ಕೆಲಸ ಸಿಕ್ಕಿತು. ಆಗ ತಿಂಗಳಿಗೆ 80 ರೂ. ಕೊಡುತ್ತಿದ್ದರು.

35 ಲಕ್ಷ ರೂ. ಲಾಭ ತಂದುಕೊಟ್ಟ ಈರುಳ್ಳಿ ಬೆಳೆ  

ರಮೇಶ್ ಅವರ ಬಳಿ ಈಗ ಜಮೀನು ಕೂಡ ಇರದ ಕಾರಣ ಗೊಂಡಾಲ್‌ನಲ್ಲಿ ಜೈನ ಕುಟುಂಬದಿಂದ ಜಮೀನು ಬಾಡಿಗೆ ಪಡೆದರು. ಆ ಜಮೀನು ಬೇಸಾಯಕ್ಕೆ ಯೋಗ್ಯವಲ್ಲದ ಕಾರಣ ಹೊಲವನ್ನು ಫಲವತ್ತಾಗಿಸಲು ಯಾವತ್ತೂ ರಾಸಾಯನಿಕಗಳನ್ನು ಬಳಸಲಿಲ್ಲ. ಗೋವಿನ ಸಗಣಿ ಮತ್ತು ಗೋಮೂತ್ರವನ್ನು ಹೊಲಗಳಿಗೆ ಹಾಕಿದಾಗ ಫಲವತ್ತಾಯಿತು. ಇಲ್ಲಿಂದ ಅವರ ಜೀವನಕ್ಕೆ ಹೊಸ ತಿರುವು ಸಿಕ್ಕಿತು. ಅವರು ಇಲ್ಲಿ ಮೊದಲ ಬಾರಿಗೆ ಈರುಳ್ಳಿ ಬೆಳೆಯನ್ನು ಹಾಕಿದಾಗ ಅದರಲ್ಲಿ 35 ಲಕ್ಷ ರೂ. ಲಾಭ ಬಂದಿತು. ಇದು ಅವರ ಜೀವನದ ಮೊದಲ ಮಹತ್ವದ ತಿರುವು. ಈ ಯಶಸ್ಸು ಅವರಿಗೆ ಕಳೆದುಕೊಂಡ ಆತ್ಮವಿಶ್ವಾಸವನ್ನು ಮರಳಿ ತಂದುಕೊಟ್ಟಿತು.

Also Read: 6 ಬಾರಿ ಫೇಲ್ ಆದ ನಂತರವೂ ಧೃತಿಗೆಡಲಿಲ್ಲ…ಮಾಣಿಯೊಬ್ಬರು IAS ಅಧಿಕಾರಿಯಾದ ಯಶೋಗಾಥೆ

ತುಪ್ಪದ ವ್ಯಾಪಾರದಲ್ಲಿ ಯಶಸ್ಸು

ರಮೇಶ್ ಅವರು ಬಾಲ್ಯದಿಂದಲೂ ಹಸುಗಳನ್ನು ಪ್ರೀತಿಸುತ್ತಿದ್ದರು. ಹಾಗಾಗಿ ಅವರು ಇದೇ ಆಸಕ್ತಿಯನ್ನು ವ್ಯಾಪಾರವಾಗಿ ಮಾಡಲು ಬದಲಾಯಿಸಿಕೊಂಡರು. ಆದರೆ ಆರಂಭದಲ್ಲಿ ಈ ಕೆಲಸವು ಸುಲಭವಿರಲಿಲ್ಲ. ಹಾಲಿನ ವಾಸನೆಯ ಬಗ್ಗೆ ದೂರುಗಳು ಬರಲಾರಂಭಿಸಿದವು. ಆಗ ರಮೇಶ್ ಹಾಲು ಮಾರಾಟವನ್ನು ನಿಲ್ಲಿಸಬೇಕಾಯಿತು. ಆದರೆ ರಮೇಶ್ ಸೋಲನ್ನು ಒಪ್ಪಿಕೊಳ್ಳುವ ವ್ಯಕ್ತಿಯಲ್ಲ.  ಚಿಕ್ಕ ಬಾಡಿಗೆ ರೂಮಿನಲ್ಲಿ ತುಪ್ಪ ತಯಾರಿಸಲು ಆರಂಭಿಸಿದರು. ಸೈಕಲ್ ನಲ್ಲಿ ಪ್ಲಾಸ್ಟಿಕ್, ಗಾಜಿನ ಲೋಟಗಳಲ್ಲಿ ತುಪ್ಪ ತುಂಬಿ ಬೀದಿ ಬೀದಿಗಳಲ್ಲಿ ಮಾರಾಟ ಮಾಡುತ್ತಿದ್ದರು. ಅವರ ಶ್ರಮ ಮುಂದೊಂದು ದಿನ ಇಷ್ಟು ದೊಡ್ಡ ಯಶಸ್ಸಿನ ರೂಪ ಪಡೆಯುತ್ತದೆ ಎಂದು ಅವರು ಅಂದುಕೊಂಡಿರಲಿಲ್ಲ. ಗ್ರಾಹಕರು ತುಪ್ಪವನ್ನು ಇಷ್ಟಪಟ್ಟರು. ಅವರ ಉತ್ಪನ್ನವು ಜನಪ್ರಿಯವಾಯಿತು.

123 ದೇಶಗಳಿಗೆ ರಫ್ತು  

ರಮೇಶ್ ಅವರು ಮಾರುತ್ತಿದ್ದ ತುಪ್ಪ ಸಾಮಾನ್ಯವಾದುದಲ್ಲ,  ಔಷಧೀಯ ಗುಣಗಳಿಂದ ಕೂಡಿದ ಗೀರ್ ಹಸುವಿನ ತುಪ್ಪವನ್ನು ತಯಾರಿಸಿದರು. ಜನರು ತಕ್ಷಣ ಅದನ್ನು ಸೇವಿಸಲು ಪ್ರಾರಂಭಿಸಿದರು. ಗೀರ್ ಹಸುವಿನ ಹಾಲಿನಿಂದ ತಯಾರಿಸಿದ ತುಪ್ಪದ ಆರೋಗ್ಯಕರ ಗುಣಗಳು ಅದನ್ನು ಬಹಳ ಜನಪ್ರಿಯಗೊಳಿಸಿದವು. ಕ್ರಮೇಣ ರಮೇಶರ ವ್ಯಾಪಾರ ಬೆಳೆಯತೊಡಗಿತು ಮತ್ತು ಅವನ ಹೆಸರು ಎಲ್ಲೆಡೆ ಹರಡಿತು. ಕೆಲವೇ ಹಸುಗಳಿಂದ ಆರಂಭವಾದ ಈ ಪಯಣ ಇಂದು 250 ಗೀರ್ ಹಸುಗಳನ್ನು ಸಾಕುವವರೆಗೂ ತಲುಪಿದ್ದು, ರಮೇಶ್ ಅವರ ಈಗ ವಾರ್ಷಿಕ ಆದಾಯ 8 ಕೋಟಿ ರೂ. ಅವರ ತುಪ್ಪ ಈಗ 123 ದೇಶಗಳಿಗೆ ರಫ್ತಾಗುತ್ತದೆ.

 

You Might Also Like

17 ಸ್ಟಾರ್ಟಪ್‌ಗಳು ಫೆಲ್ಯೂರ್‌…18ನೇ ಬಾರಿಗೆ ಕೈಹಿಡಿದ ಯಶಸ್ಸು, ಇಂದು ಜಗತ್ತಿನಾದ್ಯಂತ ಫೇಮಸ್…ಯಾರು ಈ ಅಂಕುಶ್ ಸಚ್‌ದೇವ?

ಡ್ರೈ ಫ್ರೂಟ್ಸ್… ಯಾವುದನ್ನು ನೆನೆಸಿ ತಿನ್ನಬೇಕು, ಯಾವುದನ್ನು ನೆನೆಸಬಾರದು?

Health Tips: ತೂಕ ನಷ್ಟಕ್ಕೆ, ಮಧುಮೇಹಿಗಳಿಗೆ ಮಾತ್ರವಲ್ಲ ಪ್ರತಿ ಕಾಯಿಲೆಗೂ ಪ್ರಯೋಜನಕಾರಿ ಮೆಂತ್ಯ ಕಾಳು… ಯಾವಾಗ ಮತ್ತು ಹೇಗೆ ಸೇವಿಸಬೇಕು?

ವೃತ್ತಿಜೀವನದ ಉತ್ತುಂಗದಲ್ಲಿ ಇರುವಾಗಲೇ ಮದುವೆಯಾದರು ಈ ಹಿರಿಯ ನಟಿ.. ಇಂದು ಇವರ ಮಗ ಮತ್ತು ಸೊಸೆ ಬಾಲಿವುಡ್ ಸೂಪರ್ ಸ್ಟಾರ್ಸ್‌

Baba Vanga Predictions: 2025 ರಲ್ಲಿ ಬದಲಾಗುತ್ತದೆ ಈ 4 ರಾಶಿಗಳ ಜನರ ಅದೃಷ್ಟ!

TAGGED:Dairy Farmer Success StoryDairy FarmingGir CowGir GheeGir Ghee Health BenefitsRamesh Rupareliaskykannadaಗೀರ್ ತುಪ್ಪಗೀರ್ ಹಸುರಮೇಶ್ ರೂಪರೇಲಿಯಾಸ್ಫೂರ್ತಿದಾಯಕ ಕಥೆ
Share This Article
Facebook Email Print
Share
Previous Article ‘ನಾನು ನಿಮ್ಮನ್ನು ಮದುವೆಯಾಗುತ್ತಿದ್ದೆ…’ ಧೋನಿಯ ನೆಚ್ಚಿನ ಆಟಗಾರನ ಸಹೋದರಿಗೆ ಹೀಗ್‌ ಹೇಳ್ದೋರು ಯಾರು?
Next Article ಶೇವಿಂಗ್‌ ಕ್ರೀಮ್‌ನಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ, ನೀವು ಹೀಗೂ ಬಳಸಬಹುದು!
Leave a Comment

Leave a Reply Cancel reply

Your email address will not be published. Required fields are marked *

You Might Also Like

ಹೀಗೆ ನಿಂಬೆಹಣ್ಣು ಮತ್ತು ಮೆಣಸಿನಕಾಯಿಗಳನ್ನು ನೇತು ಹಾಕುವುದು ಮೂಢನಂಬಿಕೆಯಲ್ಲ…ಇದರ ಹಿಂದಿದೆ ವೈಜ್ಞಾನಿಕ ಕಾರಣ  

ನಾಯಕಿಗೆ ಚಿನ್ನದ ಸರ ಹಾಕಲು ಈ ಸುಪ್ರಸಿದ್ಧ ನಟ ಹೆದರಿದ್ದೇಕೆ, ಮೊದಲ ಶಾಟ್‌ನಲ್ಲೇ ಖಳನಾಯಕನ ಕಾಲು ಮುರಿದಿದ್ದೇಕೆ?

ಜನಪದ ಕಥೆ: ಯಶಸ್ಸು ಸಾಧಿಸುವವರೆಗೂ ಪ್ರಯತ್ನ ಬಿಡಬಾರದು

ಅಂತರ್ ನಾಡಿ ಜ್ಯೋತಿಷ್ಯದಿಂದ ಹಿಂದಿನ ಜನ್ಮ, ವರ್ತಮಾನ, ಭವಿಷ್ಯ, ವೃತ್ತಿ ಬದುಕು, ಹಣಕಾಸು, ಆರೋಗ್ಯ, ದಾಂಪತ್ಯ ಸಮಸ್ಯೆ, ಪರಿಹಾರ ತಿಳಿಯಬಹುದು

ಬಾಲಿವುಡ್ ನಟಿಯರ ಫಿಟ್ ನೆಸ್ ರಹಸ್ಯವೇನು ಗೊತ್ತಾ….? ಏನೇ ಸಂದರ್ಭ ಬಂದ್ರು ಇದನ್ನ ಮಾತ್ರ ಮಿಸ್‌ ಮಾಡೊಲ್ಲ!

Follow US
© 2025 Sky Kannada. Newbie Techy Design Company. All Rights Reserved.
Welcome Back!

Sign in to your account

Username or Email Address
Password

Lost your password?